ಕಾರ್ತೀಕ

ಅಶ್ವಯುಜ ಸೂರ್ಯ ಚಿಮ್ಮಿದಾಗ
ಕಿರಣಗಳು ಬೆಳಕ ಬೀಜಗಳು
ರೆಂಬೆಕೊಂಬೆಗಳ ಪಣತಿಗಳಲಿ
ಮಿಂಚುಗೊಂಚಲುಗಳು ಪತಂಗಗಳು
ಭೂಮಿ ಬಾನಂಗಳದಲಿ ಚಿನಕುರುಳಿಗಳು.

ಸಂಭ್ರಮದ ಅಲೆಅಲೆಗಳಲಿ ತೇಲಿವೆ
ನಮ್ಮೆಲ್ಲರ ಮಿನುಗು ಕಣ್ಣೋಟಗಳು
ಮಾತು ಹಾಡಿನ ಸಿರಿಶುಭದ ಸುಗ್ಗೀ
ಪೇಟೆತುಂಬ ಹರಡಿಹಾಸಿದ ಗೌಜುಗದ್ದಲ
ಬೀದಿ ತುಂಬ ಮಿನುಗುವ ಜ್ಯೋತಿರ್ಮಯಿಗಳು.

ತೆಳುಫರದೆಯ ತಿಳಿಮಂಜು ಹನಿಗಳು
ತಬ್ಬಿ ಮುದ್ದಿಸಿಕೊಂಡ ಸೂರ್ಯಕಾಂತಿ ಚೆಲುವು
ಬೆಳದಿಂಗಳ ಚಂದಿರ ಮುನಿಸು ಮುರಿದು
ಸೇವಂತಿಗೆ ಹೂಗಳ ಹರಿದ ಗಂಧಗಾಳಿ
ತೇವತೀಡಿ ನೇವರಿಸಿಕೊಂಡ ಗರಿಕೆ ಹಸಿರುಸೂಸಿ.

ಕಾಲ ಕ್ರಿಯೆ ಸ್ಥಳ ಮೇಳೈಸಿ ಸಹಜಪ್ರೀತಿ
ಅರಳಿದ ಪ್ರೇಮ ಅತಿಮಧುರ ಶಿಲೆಸುಂದರ
ಸಾಕ್ಷೀ ಪ್ರಜ್ಞೆಯಲಿ ಹುಟ್ಟಿದ ಬೆಳಕಭಾವ
ಕಲೆ ಸುಂದರ ಅದು ಮಂದಿರ ಸಂತಮರ
ಬಂಗಾರದ ಕಿರಣಗಳ ಸೂಸುವ ದೀಪಾವಳಿ.

ಮಂಜು ಮುಸುಕಿದ ಸಂಜೆ ಇಳಿದ ರಾಗ
ಮಾಲಕಂಸ ಹಾಡಿದ ಹೃದಯ ಇಂಪು
ಹೊಸ ಹುರುಪಿನಲಿ ಕನಸುಗಳು ತೇಲಿ
ಹಗಲು ಹೊಳೆದು ರಾತ್ರಿ ಉಳಿದ ಜಗದಸ್ನಾನ
ಇನ್ನು ಹಾರಬಹುದು ರೆಕ್ಕೆ ಬಿಚ್ಚಿದ ಹಕ್ಕಿ ಬಾನತುಂಬ.

*****

Previous post ಕ್ಷಣಗಳು
Next post ಆಸೆ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys